ಕವನ ಬರೆಯಲು ಬಹುಕಾಲ ಕುಳಿತೆ,
ಮೂಡು ಬರಲಿಲ್ಲ ಕೈ ಮುಂದೆ ಸಾಗಲಿಲ್ಲ.
ದಿನಗಳು, ವಾರಗಳು, ತಿಂಗಳುಗಳು
ಕಳೆದರೂ ಕಾವ್ಯ ಸೃಷ್ಟಿಯಾಗಲಿಲ್ಲ.
ಕಾವ್ಯ ಕನ್ನಿಕೆಯ ಒಲಿಸಿಕೊಳ್ಳಲು
ಕವಿತಾ ಸುಧಾರಸವ ಉಣ ಬಡಿಸಲು
ಕಾದಿರುವೆ ನಾನು, ಸಂಸ್ಕೃತಿಯ ಪರಿಚಾರಕ!
ಹಸಿದಿರುವ. – ಓದುಗ, ಕಲೆಯ ಆರಾಧಕ.
ಏಕೆ ಮುನಿದಿರುವೆ ತಾಯೇ ಇಳಿದು ಬಾ,
ಬಿಳಿಯ ಕಾಗದ ಕಟ್ಟು, ಕರಿಯ ಶಾಯಿ,
ನುರಿತ ಲೇಖನಿ ಕಾದಿದೆ, ನೋಡು ಬಾ ತಾಯಿ.
ವೃತ್ತಪತ್ರಿಕೆಯಲ್ಲಿ ಬಂತು – ಜಾಹೀರಾತು
“ಕಾವ್ಯ ರಚನಾ ಸ್ಪರ್ಧೆ”ಯ ಬಹುಮಾನ ಕುರಿತು!
ವಿದ್ಯುತ್ ಹರಿಯಿತು, ಯಂತ್ರ ವೇಗದಿ ಚಲಿಸಿತು
ಮೂಡು ಮೂಡಿತು, ಮೂಡಿಗೆ ಕೊಡು ಬೆಳೆಯಿತು
ಅದುಮಿಟ್ಟ ಭಾವನೆ ಬುಗ್ಗೆಯಾಗಿ ಉಕ್ಕಿತು,
ಕಾವ್ಯಧಾರೆ ಭೋರ್ಗರೆದು ಹರಿಯಿತು
ಗರಿ ಕೆದರಿತು ಮನ – ನವಿಲಾಗಿ ಕುಣಿಯಿತು
ಶರವೇಗದಲ್ಲಿ ಆಯಿತು ಕಾವ್ಯ ಸೃಷ್ಟಿ!
ಬಂದ ಬಹುಮಾನ, ತಂದ ಸನ್ಮಾನ ಸುರಿಸಿತು ಪುಷ್ಪವೃಷ್ಟಿ.
*****
೨೧-೧೨-೧೯೯೩
Related Post
ಸಣ್ಣ ಕತೆ
-
ಪ್ರಥಮ ದರ್ಶನದ ಪ್ರೇಮ
ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…
-
ಯಿದು ನಿಜದಿ ಕತೀ…
ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ... ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ, ವುಗಾದಿ… Read more…
-
ಎರಡು ಮದುವೆಗಳು
ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…
-
ನಿರೀಕ್ಷೆ
ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…
-
ಮೋಟರ ಮಹಮ್ಮದ
ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…